Padya Priya - Kannada Poetry Recital Podcast Por ಪದ್ಯಪ್ರಿಯ arte de portada

Padya Priya - Kannada Poetry Recital

Padya Priya - Kannada Poetry Recital

De: ಪದ್ಯಪ್ರಿಯ
Escúchala gratis

ಪದ್ಯಪ್ರಿಯ, a Kannada podcast. A poem for everyday. Why recite a poem? ‪ಭಾವಗಳ ಏರುಪೇರಿಗೆ, ಪದ್ಯಗಳು ಮುಲಾಮು! ‬ಪದ್ಯಪ್ರಿಯ Arte Historia y Crítica Literaria
Episodios
  • ಹಕ್ಕಿ ಹಾರುತಿದೆ ನೋಡಿದಿರಾ? - ಕವನ ವಾಚನ
    Jan 31 2021

    ಇರುಳಿರಳಳಿದು ದಿನದಿನ ಬೆಳಗೆ 

    ಸುತ್ತಮುತ್ತಲೂ ಮೇಲಕೆ ಕೆಳಗೆ

    ಗಾವುದ ಗಾವುದ ಗಾವುದ ಮುಂದಕೆ 

    ಎವೆ ತೆರೆದಿಕ್ಕುವ ಹೊತ್ತಿನ ಒಳಗೆ

    ಹಕ್ಕಿ ಹಾರುತಿದೆ ನೋಡಿದಿರಾ? 

    - ದ.ರಾ.ಬೇಂದ್ರೆ 

    ಕವನ ಸಂಕಲನ: ಗರಿ (೧೯೩೨) 

    https://archive.org/details/dli.osmania.4412/page/n186/mode/1up 

    https://sallaap.blogspot.com/2009/06/blog-post_24.html?m=1 

    https://www.youtube.com/watch?v=3ryNlk1gup0 

    https://www.youtube.com/watch?v=CLhB53mj5Wc

    Más Menos
    2 m
  • ನಿಮ್ಮೊಡನಿದ್ದೂ ನಿಮ್ಮಂತಾಗದೆ - ಕವನ ವಾಚನ
    Nov 19 2020

    ನಿಮ್ಮೊಡನಿದ್ದೂ ನಿಮ್ಮಂತಾಗದೆ

    ಜಗ್ಗಿದ ಕಡೆ ಬಾಗದೆ

    ನಾನು ನಾನೇ ಆಗಿ. ಈ ನೆಲದಲ್ಲೆ ಬೇರೊತ್ತಿದ್ದರೂ ಬೀಗಿ

    ಪರಕೀಯನಾಗಿ

    ತಲೆಯೆತ್ತುವುದಿದೆ ನೋಡಿ

    ಅದು ಬಲುಕಷ್ಟದ ಕೆಲಸ.

     

    ವೃತ್ತದಲ್ಲಿ ಉನ್ಮತ್ತರಾದ

    ನಿಮ್ಮ ಕುಡಿತ ಕುಣಿತ ಕೂಟಗಳು

    ಕೆಣಕಿ ಎಸೆದಿದ್ದರೂ

    ಪಂಚೇಂದ್ರಿಯಕ್ಕೆ ಲಗಾಮು ಜಡಿದು ಜಾರದೆ ನಿಮ್ಮತ್ತ

    ಸಂಯಮವನ್ನೇ ಪೋಷಿಸಿ ಸಾಕುತ್ತ

    ರೇಖೆಯಲ್ಲೇ ದೊಂಬರಾಟ ನಡೆಸುವುದಿದೆ ನೋಡಿ

    ಅದು ಬಲು ಕಷ್ಟದ ಕೆಲಸ.

     

    ಒಳಗೊಳಗೆ ಬೇರುಕೊಯ್ದು

    ಲೋಕದೆದುರಲ್ಲಿ ನೀರು ಹೊಯ್ದು

    ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ

    ಗೊತ್ತಿಲ್ಲದಂತೆ ನಟಿಸಿ

    ಚಕಾರವೆತ್ತದೆ ನಿಮ್ಮೊಡನೆ ಕಾಫಿಹೀರಿ ಪೇಪರೋದಿ ಹರಟಿ

    ಬಾಳ ತಳ್ಳುವುದಿದೆ ನೋಡಿ

    ಅದು ಬಲು ಕಷ್ಟದ ಕೆಲಸ.

     

    ನಿಮ್ಮ ಮಾತುಕತೆಗಳಲ್ಲಿ ಹುದುಗಿದ ಬೆಕ್ಕು

    ಸಂಶಯದ ಪಂಜವೆತ್ತಿ

    ನನ್ನ ನಂಬಿಕೆ ನೀಯತ್ತು ಹಕ್ಕು

    ಕೊನೆಗೆ ಸಾಚಾತನವನ್ನು ಪರಚಿ, ಒತ್ತಿ

    ನೋವಿಗೆ ಕಣ್ಣು ತುಂಬಿದ್ದರೂ,

    ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ

    ನನ್ನದುರಿನಲ್ಲೇ ತನಿಖೆಮಾಡುವ ಕ್ಷಣವನ್ನು

    ಹುಸಿನಗುತ್ತ ಎದುರಿಸುವುದಿದೆಯಲ್ಲ

    ಅದು ಬಲು ಕಷ್ಟದ ಕೆಲಸ.

     

    -ಕೆ ಎಸ್ ನಿಸಾರ್ ಅಹಮದ್.

    ಕವನ ಸಂಕಲನ: ಸಂಜೆ ಐದರ ಮಳೆ.


    https://sites.google.com/site/kavanasangraha/Home/nisaar-ahamad/samje-aidara-male

    https://ruthumana.com/2020/05/04/poetry-reading-k-s-nisar-ahamed/

    https://www.youtube.com/watch?v=XfOZy918lCk

    Más Menos
    2 m
  • ಮಾತು ಮುತ್ತು - ಕವನ ವಾಚನ
    Nov 18 2020

    ಮಾತು ಬರುವುದು ಎಂದು ಮಾತಾಡುವುದು ಬೇಡ;

    ಒಂದು ಮಾತಿಗೆ ಎರಡು ಅರ್ಥವುಂಟು.

    ಎದುರಿಗಿರುವವ ಕೂಡ ಮಾತ ಬಲ್ಲವ ಗೆಳೆಯ;

    ಬರಿದೆ ಆಡುವ ಮಾತಿಗರ್ಥವಿಲ್ಲ.

     

    ಕಡಲ ತಟಿಯಲಿ ತರುಣ ಬಲೆಯ ಬೀಸಿದ್ದಾನೆ;

    ಮೀನು ಬೇಳುವ ತನಕ ಕಾಯ ಬೇಕು.

    ಮೀನ ಹೊರೆಯನು ಹೊತು ಮನೆಗೆ ಬಂದಿದ್ದಾನೆ;

    ಹುಡುಕುತ್ತಲಿಹನವನು ಮುತ್ತಿಗಾಗಿ.

     

    ಮಾತು ಮುತ್ತೆನ್ನುವುದು ಬಲ್ಲವರ ಉಕ್ತಿ; ಬಿಡು.

    ಮೀನಿನಿಂದಲು ನಮಗೆ ಲಾಭವುಂಟು.

    ಮುತ್ತ ಹುಡುಕಲು ಹೋಗಿ ಮೀನತಂದಿದ್ದಾನೆ.

    ಅವನ ದುಡಿಮೆಗೆ ಕೂಡ ಅರ್ಥವುಂಟು.

     

    ಮನೆಗೆ ಬಂದಾಗವನ ಮಡದಿ ಮೆಲ್ಲನೆ ನಕ್ಕು

    ಮುತ್ತಕೊಟ್ಟಳು ಅವನ ಹಸಿದ ತುಟಿಗೆ.

    ಹೃದಯವನು ಕಲಕಿತ್ತು ಅವಳ ಮೌನದ ಮುತ್ತು.

    ಮುತ್ತು ಸಿಕ್ಕಿತು ಎಂದು ನಕ್ಕವನು.

    - ಕೆ ಎಸ್ ನರಸಿಂಹಸ್ವಾಮಿ

    ಕವನ ಸಂಕಲನ: ನವಿಲದನಿ


    https://sites.google.com/site/kavanasangraha/Home/ksn/naviladani

    Más Menos
    2 m
Todas las estrellas
Más relevante
This is a great successful effort to bring Kannada Kavana to listening audience.

Could we also have author name for each recited poem? Also great if we can also have variety of voices reading poems.

Great Effort to bring Kannada Kavana to audio

Se ha producido un error. Vuelve a intentarlo dentro de unos minutos.